ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[Rashmi Munikempanna translated into English, the written form of the speech given by Devanur Mahadeva on 3.2.2018, receiving the award of Shivram Karanta Pratishthana of Mudubidiri. Article was published in The Indian Express newspaper, Gained in Translation section on 22.7.2018. ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿಯನ್ನು 3.2.2018ರಂದು ಸ್ವೀಕರಿಸಿ ದೇವನೂರ ಮಹಾದೇವ ಅವರು ಮಾಡಿದ ಭಾಷಣದ ಬರಹ ರೂಪವನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು 22.7.2018ರ The Indian Express ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
[Devanur Mahadeva wrote an open letter to Union Skill Development Minister Ananthakumar Hegde on 24.12.2017 in the wake of his controversial remarks at ayouth fair held at Kukanur, Koppal. Its English translation was done by Rashmi Munikempanna which was published in online newspapers on 30.12.2017. ಕೇಂದ್ರಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ 24.12.2017 ರಂದು ಕೊಪ್ಪಳದ ಕುಕನೂರಿನಲ್ಲಿ ನಡೆದ ಯುವಜನ ಮೇಳದಲ್ಲಿ ಆಡಿದ ವಿವಾದಾತ್ಮಕ ಮಾತುಗಳ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು, ಅವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದರ ಇಂಗ್ಲಿಷ್ ಅನುವಾದವನ್ನು ರಶ್ಮಿ ಮುನಿಕೆಂಪಣ್ಣ ಅವರು ಮಾಡಿದ್ದು ಅದು 30.12.2017 ರಂದು http://www.countercurrents.org ಹಾಗೂ http://indianculturalforum.in ಎಂಬ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
‘ಎದೆಗೆ ಬಿದ್ದ ಅಕ್ಷರ’ ಕುರಿತು ಪ್ರೊ.ಶಿವರಾಮಯ್ಯ ಅವರು ‘ಅರುಹು ಕುರುಹು’, ಜೂನ್ 2013ರ ಸಂಚಿಕೆಯಲ್ಲಿ ಬರೆದ ಲೇಖನ ನಮ್ಮ ಓದಿಗಾಗಿ ….
ಮುಂದೆ ನೋಡಿ -
ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕುರಿತು ನಾಗರಾಜು ತಲಕಾಡು ಅವರು ಬರೆದ ವಿಮರ್ಶೆ, ಅವರ ‘ಸೌಹಾರ್ದ ವಿಮರ್ಶೆ’ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಆ ಲೇಖನ ….
ಮುಂದೆ ನೋಡಿ -
1992 ರ ಸಂಚಯ ಸಾಹಿತ್ಯ ಪತ್ರಿಕೆಯ ವಿಶೇಷಾಂಕ ‘ಬಗೆ ತೆರೆದ ಬಾನು’ ವಿನಲ್ಲಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಂದು ಮಾತುಕತೆ ನಡೆಸಿದ್ದಾರೆ ಪತ್ರಿಕೆಯ ಸಂಪಾದಕರೂ ಕವಿಯೂ ಆದ ಡಿ.ವಿ.ಪ್ರಹ್ಲಾದ್ ಅವರು. ಸಂದರ್ಶನದ ಮರು ಓದು, ಅಡಿಗರ ಕುರಿತ ನಮ್ಮ ಗ್ರಹಿಕೆಯ ವಿಸ್ತರಣೆಗಾಗಿ ಹಾಗೂ ದೇವನೂರರ, ಕುಸುಮಬಾಲೆ ಕುರಿತ ಅಭಿಪ್ರಾಯಕ್ಕಾಗಿ…
ಮುಂದೆ ನೋಡಿ -
ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಉಪನ್ಯಾಸಕರು ಹಾಗೂ ವಿಮರ್ಶಕರು ಆದ ನಾಗಣ್ಣ ಕಿಲಾರಿಯವರು ತಮ್ಮ ‘ನಕ್ಷತ್ರ ಮಾರ್ಗ’ ವಿಮರ್ಶಾ ಸಂಕಲನದಲ್ಲಿ ಬರೆದಿರುವುದು.
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ‘ಒಡಲಾಳ’ ವನ್ನು ಉರ್ದುವಿಗೆ ಪ್ರೊ.ಮಾಹೆರ್ ಮನ್ಸೂರ್ ಅವರು ಅನುವಾದಿಸಿದ್ದು ಅದನ್ನು ಕನ್ನಡದ ಇತರ ಉತ್ತಮ ಕೃತಿಗಳ ಅನುವಾದದ ಜೊತೆಗೆ ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಅದರ ಪ್ರತಿರೂಪ ಇಲ್ಲಿದೆ.]
ಮುಂದೆ ನೋಡಿ -
[On the occasion of the merger of Sarvodaya Karnataka Party with Swaraj India on 25.3.2017, Devanur Mahadeva delivered inagural speech. It was translated into English by Rashmi Munikempanna and published in the web magazine http://www.countercurrents.org. ಸರ್ವೋದಯ ಕರ್ನಾಟಕ ಪಕ್ಷವು, ಸ್ವರಾಜ್ ಇಂಡಿಯಾ ಜೊತೆಗೆ 25.3.2017ರಂದು ವಿಲೀನವಾದ ಸಂದರ್ಭದಲ್ಲಿ, ದೇವನೂರ ಮಹಾದೇವ ಅವರು ಆಡಿದ ಆಶಯ ನುಡಿಯನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಅದು http://www.countercurrents.org ಎಂಬ ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.]
ಮುಂದೆ ನೋಡಿ -
ಎ.ಎಂ.ಶಿವಸ್ವಾಮಿ ಅವರು ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಯನ್ನು ಹಾಡಿನ ಮೂಲಕ ಜುಲೈ 21, 2013 ರಂದು ನಿರೂಪಿಸಿರುವುದರ ಚಿತ್ರಿಕೆ.
ಮುಂದೆ ನೋಡಿ -
ಯಾಜಿ ಪ್ರಕಾಶನ ಪ್ರಕಟಿಸಿರುವ ಕವಿ, ವಿಮರ್ಶಕಿ ಡಾ.ಎಚ್.ಎಲ್. ಪುಷ್ಪಾ ಅವರ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಕೃತಿಯಲ್ಲಿ ‘ದೇವನೂರು ಮಹಾದೇವ ಅವರ ಕಥನ ಸಾಹಿತ್ಯದಲ್ಲಿ ಹೆಣ್ಣು’ ಎಂಬ ಈ ಲೇಖನ ಪ್ರಕಟವಾಗಿದೆ.
ಮುಂದೆ ನೋಡಿ