ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ಫೋಟೋ ಹಿನ್ನೆಲೆ:
ದೇವನೂರ ಮಹಾದೇವ ಅವರು ಪಿಯುಸಿ ಫೇಲ್ ಆಗಿದ್ದಾಗ…ಅಂದಾಜು 1967 ರಲ್ಲಿ, ಊಟಕ್ಕೂ ತೊಂದರೆಯಿದ್ದ ಸಂದರ್ಭದಲ್ಲಿ ಆಲನಹಳ್ಳಿ ಕೃಷ್ಣ ಅವರು ಒತ್ತಾಯಿಸಿ ನಂಜನಗೂಡಿನ ವಿದ್ಯಾಪೀಠದಲ್ಲಿ ವಯಸ್ಕರ ಶಿಕ್ಷಣ ಸಮಿತಿ ವತಿಯಿಂದ ಮೂರು ತಿಂಗಳ ಕಾಲ ನಡೆದ ‘ಪಠ್ಯ ಪುಸ್ತಕ ರಚನಾ ಕಮ್ಮಟ’ ಕ್ಕೆ ಸೇರಿಸಿದ್ದರು.[ಹೊಟ್ಟೆ ತುಂಬಾ ಒಳ್ಳೆಯ ಊಟ ಸಿಗುವುದೆಂಬ ಆಸೆಗೆ ಮಹಾದೇವ ಅವರು ಅಲ್ಲಿಗೆ ಸೇರಲು ಒಪ್ಪಿದ್ದರು!] ಆಗಲೇ ಮಹಾದೇವ ಅವರು ‘ನಂಬಿಗೆಯ ನೆಂಟ’ ಎಂಬ ಪಠ್ಯವನ್ನು ರಚಿಸಿದ್ದು. ಅವರೊಂದಿಗೆ ಕಮ್ಮಟದಲ್ಲಿ… ಕ್ಯಾತನಹಳ್ಳಿ ರಾಮಣ್ಣ, ಭಾರತೀಸುತ, ಸವ್ಯಸಾಚಿ, ವೆಂಕಟಸುಬ್ಬಯ್ಯ, ಜಿ.ಜಿ.ಮಂಜುನಾಥನ್ ….ಇನ್ನಿತರ ಖ್ಯಾತ ಸಾಹಿತಿಗಳೂ, ಲೇಖಕರು, ಉಪನ್ಯಾಸಕರೂ ಭಾಗವಹಿಸಿದ್ದರು.
ಮುಂದೆ ನೋಡಿ -
-
2013 ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕಾಗಿ ಮಾಡಿದ ವಿಶೇಷ ಸಂವಾದ ಕಾರ್ಯಕ್ರಮ “ಅಪೂರ್ವ ಸಂಗಮ” ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು…
ಮುಂದೆ ನೋಡಿ -
ತುಮಕೂರು ಜಿಲ್ಲೆ ಶಿರಾದ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ನಡೆದ 65ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೆ ದೇವನೂರ ಮಹಾದೇವ, ಪ್ರೊ.ರವಿವರ್ಮ ಕುಮಾರ್, ಕಡಿದಾಳು ಶಾಮಣ್ಣ ಇನ್ನಿತರರಿದ್ದಾರೆ. [ಫೋಟೋ ಕೃಪೆ-ಪ್ರೊ.ರವಿವರ್ಮ ಕುಮಾರ್]
ಮುಂದೆ ನೋಡಿ -
ಪ್ರಸ್ತುತ ರಾಜಕೀಯ ಸನ್ನಿವೇಶ ಕುರಿತು-ನ್ಯೂಸ್ 18 ನಲ್ಲಿ ದೇವನೂರ ಮಹಾದೇವ ಅವರ ಮಾತುಗಳು 20.7.2019ರಂದು……
ಮುಂದೆ ನೋಡಿ -
15.2.2019 ರಂದು ಮೈಸೂರಿನಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ ವತಿಯಿಂದ “ನಿರುದ್ಯೋಗದ ವಿರುದ್ಧ ರಾಜ್ಯಮಟ್ಟದ ಯುವಜನ ಸಮಾವೇಶ”ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳು….
ಮುಂದೆ ನೋಡಿ -
ನೆದರ್ಲ್ಯಾಂಡ್ ನ ಯುವ ವಿಜ್ಞಾನಿ, ಅಧ್ಯಾಪಕಿ ಹಾಗೂ ಸಂಶೋಧನಾರ್ಥಿ, ಸಾಹಿತ್ಯಾಸಕ್ತೆ ಎವಿಲಿನ್ ಡಿ ಹೂಪ್ ಅವರು ಭಾರತಕ್ಕೆ ಆಗಮಿಸಿದ್ದಾಗ, 6.4.2019ರಂದು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ದೇವನೂರ ಮಹಾದೇವ ಅವರು, ಸಂಭಾಷಣೆಯಲ್ಲಿ ತೊಡಗಿದ ಕೆಲ ಚಿತ್ರಗಳು…. ಇವರು ದೇವನೂರರ ಕುಸುಮಬಾಲೆ ಕಾದಂಬರಿ ಸೂಸಾನ್ ಡೇನಿಯಲ್ ಅವರಿಂದ ಇಂಗ್ಲಿಷ್ ಗೆ ಅನುವಾದವಾದ ನಂತರ, ಯೂರೋಪಿಯನ್ ದೃಷ್ಟಿಕೋನದಿಂದ ಇಂಗ್ಲೀಷ್ ಅನುವಾದದಲ್ಲಿ ಆಗಬೇಕಿದ್ದ ಕೆಲ ಮಾರ್ಪಾಡುಗಳನ್ನು ಸೂಚಿಸಿದ್ದರು. [ಈ ಫೋಟೋಗಳನ್ನು ಕೊಡುಗೆಯಾಗಿ ನೀಡಿದ ಪತ್ರಕರ್ತ ಕೆ.ಎನ್. ನಾಗೇಶ್ ಅವರಿಗೆ ಧನ್ಯವಾದಗಳು]
ಮುಂದೆ ನೋಡಿ -
ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಅಂಗವಾಗಿ 2019 ಫೆ.13ರಂದು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ “ಕೃಷಿ ಬಿಕ್ಕಟ್ಟು, ಯುವಜನರ ತಲ್ಲಣ, ಮುಂದಿನ ಲೋಕಸಭೆ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ” ಕುರಿತು ‘ವೈಚಾರಿಕ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ’ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ವಿಡಿಯೋ, ಫೋಟೋಗಳು, ಪತ್ರಿಕಾ ವರದಿ ಇಲ್ಲಿದೆ.
ಮುಂದೆ ನೋಡಿ -
-
TV House, ಜನವರಿ 29, 2019 ರಂದು ದೇವನೂರ ಮಹಾದೇವ ವ್ಯಕ್ತಿಚಿತ್ರವನ್ನು You tube ನಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಅವರ ಫೋಟೋ, ವಿಡಿಯೋಗಳ ಕೊಲಾಜ್ ಮಾಡಲಾಗಿದೆ.
ಮುಂದೆ ನೋಡಿ