ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
15.12.2019 ರಂದು ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ತುಣುಕು News 1 Kannada ದೃಶ್ಯ ಮಾಧ್ಯಮದಲ್ಲಿ…
ಮುಂದೆ ನೋಡಿ -
-
ಕೆಲವು ವರ್ಷಗಳ ಹಿಂದೆ ದೇವನೂರ ಮಹಾದೇವ ಅವರು ತುಮಕೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ತೆರಳಿದ್ದಾಗ ಕೆ.ಬಿ.ಸಿದ್ಧಯ್ಯ ಅವರನ್ನು ಭೇಟಿಯಾಗಿದ್ದ ಸಂದರ್ಭದ ಕೆಲ ಚಿತ್ರಗಳು… [ಫೋಟೋ ಕೊಡುಗೆ -ನಿತ್ಯಾನಂದ ಬಿ.ಶೆಟ್ಟಿ]
ಮುಂದೆ ನೋಡಿ -
ಪ್ರಜಾವಾಣಿ ದೀಪಾವಳಿ ವಿಶೇಷಾಂಕ-2019ರ ಕಥೆ/ಕವನ ಸ್ಪರ್ಧೆಯ ವಿಜೇತರಿಗೆ ದಿನಾಂಕ 12.11.2019ರಂದು ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬಹುಮಾನ ವಿತರಿಸಿದ ದೇವನೂರ ಮಹಾದೇವ ಅವರು…. ಕೆಲವು ಫೋಟೋಗಳು[ಕೃಪೆ-ಪ್ರಕಾಶ್]
» -
‘ಆರ್ ಸಿ ಇ ಪಿ’ [ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ] ಅಂತರಾಷ್ಟ್ರೀಯ ಮಟ್ಟದಲ್ಲಿ, ನವೆಂಬರ್ 2019ರಲ್ಲಿ ಒಪ್ಪಂದಕ್ಕೆ ಕೇಂದ್ರ ಸರಕಾರ ತಯಾರಾಗಿದ್ದು, ಇದನ್ನು ವಿರೋಧಿಸಿ ದೇಶಾದ್ಯಂತ 24.10.2019ರಂದು ಪ್ರತಿಭಟನೆಗಳು ನಡೆದವು. ರೈತಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಡಿಯೋ ರೂಪ ಇಲ್ಲಿದೆ. ಫೋಟೋ ಕೃಪೆ-ಪ್ರಜಾವಾಣಿ
ಮುಂದೆ ನೋಡಿ -
[ಗೌರಿ ಲಂಕೇಶ್ ಅವರು 5 ಸೆಪ್ಟೆಂಬರ್ 2017 ರಂದು ಗುಂಡೇಟಿನಿಂದ ಕೊಲೆಯಾದ ಸಂದರ್ಭದಲ್ಲಿ, ಅವರ ಕೊಲೆಗೆ ಪ್ರತಿರೋಧವಾಗಿ ಬೆಂಗಳೂರಿನಲ್ಲಿ 12.9.2017ರಂದು ಆಯೋಜಿಸಿದ್ದ ‘ನಾನು ಗೌರಿ’ ಕಾರ್ಯಕ್ರಮದಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರ ಮಾತುಗಳು]
ಮುಂದೆ ನೋಡಿ -
[13.2.2019ರಂದು ನಡೆದ ರೈತ ಹೋರಾಟಗಾರ ಎಂ.ಡಿ.ನಂಜುಂಡಸ್ವಾಮಿಯವರ ನೆನಪಿನ ಕಾರ್ಯಕ್ರಮದಲ್ಲಿ ಅವರೊಂದಿಗಿನ ತಮ್ಮ ನೆನಪುಗಳನ್ನು ಬಿಚ್ಚಿಟ್ಟಿರುವ-ದೇವನೂರ ಮಹಾದೇವ ಅವರು.]
ಮುಂದೆ ನೋಡಿ -
ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು 12.10.2019 ರಂದು ಶಿಕ್ಷಣಾಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು. ವಿಷಯ ತಿಳಿದ ಸಾಹಿತಿ ದೇವನೂರ ಮಹಾದೇವ ಅವರು ಶಾಲೆಗೆ ಆಗಮಿಸಿ, ಒತ್ತಾಯ ನಡೆಸುತ್ತಿರುವವರನ್ನು ಭೇಟಿಮಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಮತ್ತು ಶಿಕ್ಷಣಾಧಿಕಾರಿಗಳಿಗೆ ವಿವೇಕಾನಂದರು ದೀನ ದಲಿತರ ಬಗ್ಗೆ ಹೊಂದಿದ್ದ ಭಾವನೆಗಳನ್ನು ವಿವರಿಸಿದರು…. ಆ ಮಾತುಗಳ ವಿಡಿಯೋ ಇಲ್ಲಿದೆ.
ಮುಂದೆ ನೋಡಿ -
ಶ್ರೀ ಡಿ.ಎಸ್.ನಾಗಭೂಷಣ ಅವರ “ಗಾಂಧಿ ಕಥನ” 29.9.2019ರಂದು ಬೆಂಗಳೂರಿನಲ್ಲಿ ದೇವನೂರ ಮಹಾದೇವ ಅವರಿಂದ ಬಿಡುಗಡೆಗೊಂಡ ಸಂದರ್ಭದ ಕೆಲ ಭಾವಚಿತ್ರಗಳು….
ಮುಂದೆ ನೋಡಿ -
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ, 2012 ಮಾರ್ಚ್ 25 ರಂದು ಆಯೋಜಿಸಿದ್ದ ಕಲಾರಸಗ್ರಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ್ದಾಗ ತಾವು ತೆಗೆದ ಭಾವಚಿತ್ರಗಳನ್ನು ಅಭಿಷೇಕ್ ವೈ.ಎಸ್ ಅವರು ‘ನಮ್ಮ ಬನವಾಸಿ”ಗೆ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ಹೃದಯಪೂರ್ವಕ ವಂದನೆಗಳು.
-ಬನವಾಸಿಗರು
ಮುಂದೆ ನೋಡಿ